Welcome to reportnowtv.in   Click to listen highlighted text! Welcome to reportnowtv.in
Wednesday, February 5, 2025
Homechikkaballapuraದೇವನಹಳ್ಳಿ ಪಟ್ಟಣದ ಶಿವಕುಮಾರ ಸ್ವಾಮಿ ವೃತ್ತದ ಬಳಿಯ ರಾಗಿ ಗೋದಾಮಿನಲ್ಲಿ ರಾಗಿ ಬೆಳೆಗಾರರ ನೊಂದಣಿ ಕಾರ್ಯಕ್ಕೆ...

ದೇವನಹಳ್ಳಿ ಪಟ್ಟಣದ ಶಿವಕುಮಾರ ಸ್ವಾಮಿ ವೃತ್ತದ ಬಳಿಯ ರಾಗಿ ಗೋದಾಮಿನಲ್ಲಿ ರಾಗಿ ಬೆಳೆಗಾರರ ನೊಂದಣಿ ಕಾರ್ಯಕ್ಕೆ ಸಚಿವ ಚಾಲನೆ ನೀಡಿದರು.

ದೇವನಹಳ್ಳಿ: ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಮಟ್ಟದ 2024-25 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿ ಬೆಳೆಗಾರರ ನೊಂದಣಿ ಕಾರ್ಯವು ರಾಜ್ಯ ಉಗ್ರಾಣ ನಿಗಮದ ಗೋದಾಮಿನಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ರಾಗಿ ನೊಂದಣಿಗೆ ಚಾಲನೆ ನೀಡಿದರು.

ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿಯವರಲ್ಲಿ ರಾಗಿ ಖರೀದಿ ವಿಚಾರವಾಗಿ ಚರ್ಚಿಸಿ ಪಕ್ಕದ ರಾಜ್ಯಗಳಿಗೆ ರಾಗಿ ಬೇಡಿಕೆಯನ್ನು ನಮ್ಮ ರಾಜ್ಯದಿಂದ ಒದಗಿಸುವಂತೆ ತಿಳಿಸಿದ್ದು ನಮ್ಮ ರಾಜ್ಯದಲ್ಲಿ ರಾಗಿ ಬೆಳೆಯುವ ರೈತರು ಹೆಚ್ಚಾಗಿ ಬೆಳೆದಿದ್ದು ರೈತರಿಂದ ನೇರವಾಗಿ ರಾಗಿ ಖರೀದಿಸುವ ಕೆಲಸವಾಗುತ್ತಿದೆ ಇದನ್ನು ಸಕಾಲದಲ್ಲಿ ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಯಪ್ಪ ಅಧ್ಯಕ್ಷ ಶಾಂತಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಜಗನ್ನಾಥ್, ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್, ಅಪರ ಜಿಲ್ಲಾಧಿಕಾರಿ ಅಮರೇಶ್, ನಿಗಮದ ನಿರ್ದೇಶಕ ಚಂದ್ರಕಾಂತ್, ಇನ್ನು ಹಲವು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!